ಮಂಗಳೂರು ಇನ್ಫೋಸಿಸ್ ನಲ್ಲಿ ನಡೆದ ದಸರಾ ಆಚರಣೆಗೆ ರಚಿಸಿದ ಆಹ್ವಾನ ಪತ್ರಿಕೆ .
ಸಾಗರದಾಳದಿ ಜನಿಸಿದ ಕಾರ್ಮೋಡವು
ಸೂರ್ಯನ ಒಲವಿಂದ ಒಡಲು ತುಂಬಿ ಬಂದಿ ಹಳು
ನಮ್ಮೂರಿಗೆ, ನಮ್ಮ ಮಂಗಳೂರಿಗೆ ...
ನಿರ್ಮಲ ಮನಸಿನ ಚೆಂದದ ಜನರ ಕಂಡು
ನೀರಾಗಿಹಳು ಇಲ್ಲೇ!
ಹಸಿರ ಹೆಸರು,ಉಸಿರು ಎಲ್ಲವೂ
ಆಗಿಹಳು ಈಕೆ ...
ಕಡಲ ತೀರದ ಶೃಂಗ ಶ್ರೇಣಿಯ
ಮೋಡದ ನಡುವಲಿ
ಸು'ಮಂಗಲೆ' ಆಗಿಹಳು 'ನೇತ್ರಾ'ವತಿ ಇಂದು ...
ಆಕೆಯ ಮಡಿಲಲ್ಲಿ ನಮಗಿಂದು
ಹಬ್ಬದ ಸಡಗರ,
ಹಸಿರು ತೋರಣ, ಬಾಳೆಯ ಕಂಬಗಳು
ತರಿಸಿದೆ ದಸರೆಯ ಸಂಭ್ರಮ
ರಂಗಾದ ರಂಗೋಲಿ, ಚಿತ್ರಪಟ ಕೋಲಾಟ
ಕುಣಿಸಿದೆ ಮೈಮನ ...
ನೋಡ ಬನ್ನಿ, ಜೊತೆಗೂಡಿ ಆಚರಿಸೋಣ
ಈ ನಮ್ಮ ನಾಡ ಹಬ್ಬವನ್ನ.
ಇಂತಿ,
ಸಾಗರದ ಒಡಲ ಸಾಫ್ಟ್ವೇರ್ ಜೀವಿಗಳು!
Comments
Post a Comment