ಎಲ್ಲರೂ ಕೇಳಿದರು ನನ್ನ ಕವಿತೆಗಳಿಗೆ ಸ್ಫೂರ್ತಿ ಯಾರೆಂದು
ಯಾಮಾರಿಸುತ್ತಲೇ ಬಂದೆ ಯಾರೂ ಇಲ್ಲವೆಂದು
ಇದ್ದಳು ಒಬ್ಬಾಕೆ ,
ಜಡವಾಗಿದ್ದ ನನ್ನ ಮನಕೆ ಪ್ರೀತಿಯ ಸವಿ ಉಣಿಸಿದಳು
ಕಳೆದೇ ಹೋಗಿದ್ದೆ ಪ್ರೀತಿಯ ಗುಂಗಿನಲ್ಲಿ ಕೆಲವಸ್ಟು ದಿನ ...
ತಪ್ಪು ಮಾಡಿದೆ ನನ್ನ ಪ್ರೀತಿಯ ಅವಳಿಗೆ ಹೇಳದೆ
ತಪ್ಪು ಮಾಡಲಿಲ್ಲ ಅವಳು ನನಗಾಗಿ ಕಾಯದೆ ...
ಅವಳ ಪ್ರೀತಿಯ ಬೇರುಗಳು ನನ್ನ ಮನ ಹೊಕ್ಕಿವೆ
ಪ್ರೇಮದ ಗಿಡ ಸತ್ತರೂ ಅದರ ಛಾಯೆ ಜೀವಂತವಾಗಿವೆ ...
ಹೆಕ್ಕಿ ತೆಗಿಯಲೇ ಬೇಕಿದೆ ಅವುಗಳನು ನಾನೀಗ
ಇಲ್ಲವಾದಲ್ಲಿ ಕೊಂದೇ ಬಿಡುತ್ತವೆ ಅವು ನನ್ನನ್ನೀಗ ...
ಹಳೆಯ ಕಳೆಯ ತೊಳೆದು ಸಮೃದ್ದ ಫಸಲನ್ನು ಬೆಳೆವ ಹಂಬಲ
ಕಾಯಿಸುತ್ತಾ ಕಾಡುವ ಮುಂಗಾರು ಮಳೆಯೇ , ನೀನೇಕೆ ಇಷ್ಟು ಚಂಚಲ ...
nice maga
ReplyDelete